Home » ರಾಜ್ಯ » ಸರಕಾರಿ ಶಾಲೆಗಳಲ್ಲಿ ಅತಿಥಿಗಳೇ ಶಿಕ್ಷಕರೆ ಆಧಾರ!

ಸರಕಾರಿ ಶಾಲೆಗಳಲ್ಲಿ ಅತಿಥಿಗಳೇ ಶಿಕ್ಷಕರೆ ಆಧಾರ!

ಗಡಿ ಜಿಲ್ಲೆ ಬೀದರನಲ್ಲಿ 1,504 ಹುದ್ದೆಗಳು ಖಾಲಿ ಶಿಕ್ಷಣ ಗುಣಮಟ್ಟ ಕುಸಿತ, ಮಕ್ಕಳ ಭವಿಷ್ಯಕ್ಕೆ ಪೆಟ್ಟು

ಬೀದರ: ವರ್ಷದಿಂದ ವರ್ಷಕ್ಕೆ ಬೀದರ ಜಿಲ್ಲೆ ಎಸ್ಸೆಸ್ಸೆಲ್ಸಿ
ಪರೀಕ್ಷೆಯಲ್ಲಿ ಕನಿಷ್ಟ ಫಲಿತಾಂಶಕ್ಕೆ ಕುಸಿಯುತ್ತಿದ್ದು, ಇದಕ್ಕೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯೇ ಕಾರಣವಾಗಿದೆ. ಗಡಿನಾಡಲ್ಲಿ ಪ್ರಾಥಮಿಕ-ಪ್ರೌಢಶಾಲೆ ಸೇರಿ ಶೇ.20ಕ್ಕಿಂತ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗುತ್ತಿದೆ. ಬೀದರ ಸೇರಿದಂತೆ ವಿಶೇಷ ಸ್ಥಾನ ಹೊಂದಿರುವ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ಹುದ್ದೆಗಳ ಭರ್ತಿಗೆ ಸರಕಾರ ಆಸಕ್ತಿ ತೋರುತ್ತಿಲ್ಲ. ಹೀಗಾಗಿ ಪಠ್ಯ ಬೋಧನೆಗೆ ಅತಿಥಿ ಶಿಕ್ಷಕರ ಮೇಲೆ ಅವಲಂಬನೆ ಆಗಬೇಕಾದ ಸ್ಥಿತಿ ಇದೆ. ಜಿಲ್ಲೆಯಲ್ಲಿ ಪ್ರಾಥಮಿಕ- ಪ್ರೌಢಶಾಲೆ ಒಳಗೊಂಡು ಒಟ್ಟು 7,457 ಶಿಕ್ಷಕರ ಹುದ್ದೆಗಳು ಮಂಜೂರಾಗಿವೆ. ಇದರಲ್ಲಿ 5,953 ಶಿಕ್ಷಕರ ನೇಮಕಾತಿ ಆಗಿದೆ. ಇನ್ನುಳಿದ 1,504 ಹುದ್ದೆಗಳು ಖಾಲಿ ಇವೆ.

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ರಾಜ್ಯ ಸರ್ಕಾರ ಕೆಕೆಆರ್ ಡಿಬಿ ಮೂಲಕ “ಅಕ್ಷರ ಆವಿಷ್ಕಾರ’ ಯೋಜನೆಯಡಿ ಕೋಟ್ಯಂ ತರ ರೂ. ವೆಚ್ಚ ಮಾಡಲಾ ಗುತ್ತಿದೆ. ಆದರೆ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ತುಂಬಲು ಮಾತ್ರ ಇಚ್ಛಾಶಕ್ತಿ ತೋರುತ್ತಿಲ್ಲ.

ಅದಕ್ಕೆ ಪೂರಕವಾಗಿ ಜಿಲ್ಲೆಯ ಸಚಿವರು, ಶಾಸಕರು ಸರ್ಕಾರದ ಮೇಲೆ ಒತ್ತಡ ಹಾಕುವಲ್ಲಿ ಮುಂದಾಗುತ್ತಿಲ್ಲ.

ಜಿಲ್ಲೆಯಲ್ಲಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ 5,789

ಶಿಕ್ಷಕರ ಹುದ್ದೆಗಳನ್ನು ಮಂಜೂರು ಮಾಡ ಲಾಗಿದ್ದು, ಅದರಲ್ಲಿ 4,710 ಶಿಕ್ಷಕರ ನೇಮಕಾತಿಯಾಗಿದ್ದು, 1,079 ಹುದ್ದೆಗಳನ್ನು ಭರ್ತಿ ಮಾಡಬೇಕಿದೆ. ಪ್ರೌಢಶಾಲಾ ವಿಭಾಗದಲ್ಲಿ 1,668 ಶಿಕ್ಷಕರ ಹುದ್ದೆಗಳು ಮಂಜೂರಾಗಿದ್ದು, ಅದರಲ್ಲಿ 1,243 ಶಿಕ್ಷಕರ ನೇಮಕಾತಿ ಆಗಿದೆ. ಇನ್ನೂ 425 ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿವೆ. ಎರಡು ವಿಭಾಗ ಸೇರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಬಸವಕಲ್ಯಾಣ ತಾಲೂಕಿನಲ್ಲಿ 455, ಔರಾದನಲ್ಲಿ 342 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಭಾಲ್ಕಿ 262, ಬೀದರ 134, ಹುಮನಾಬಾದ್ 320 ಹುದ್ದೆಗಳು ಖಾಲಿ ಇವೆ.

ಪ್ರಾಥಮಿಕ ಶಾಲಾ ವಿಭಾಗ

ತಾಲೂಕು             ಹುದ್ದೆ             ಭರ್ತಿ             ಖಾಲಿ

ಔರಾದ                1267           1020          247

ಬಸವಕಲ್ಯಾಣ      1223             897           326

ಭಾಲ್ಕಿ                 1009              819           190

ಬೀದರ                1262           1158          104

ಹುಮನಾಬಾದ್   1028             816           212

ಒಟ್ಟು                 5789           4710          1079

ಜಿಲ್ಲೆಯಲ್ಲಿ ವಿಶೇಷವಾಗಿ ವಿಜ್ಞಾನ, ಗಣಿತ, ಇಂಗ್ಲಿಷ್ ವಿಷಯಗಳ ಶಿಕ್ಷಕರ ಅಭಾವ ಹೆಚ್ಚಿದೆ. ಇದರಿಂದ ಈ ವಿಷಯಗಳಲ್ಲಿ ವಿದ್ಯಾರ್ಥಿಗಳು ಕಡಿಮೆ ಸಾಧನೆ ಮಾಡುವುದು ಕಂಡು ಬಂದಿದೆ. ಈ ವಿಷಯಗಳಲ್ಲೇ ಹೆಚ್ಚಿನ ವೈಫಲ್ಯ ಕಾಣುತ್ತಿದ್ದೇವೆ. ಶಿಕ್ಷಕರ ಕೊರತೆ ನೀಗಿಸಲು ಅತಿಥಿ ಶಿಕ್ಷಕರ ನೇಮಕಾತಿ ಮಾಡಲಾಗುತ್ತಿದೆ. ಆದರೆ

ಅತಿಥಿ ಶಿಕ್ಷಕರ ನೇಮಕಾತಿ ಮಾಡಲಾಗುತ್ತಿದೆ. ಆದರೆ ಕಳೆದ ಎರಡೂರು ವರ್ಷಗಳಿಂದ ಅವರ ವೇತನ ಪರಿಷ್ಕರಿಸಿಲ್ಲ. ಇದು ಮಕ್ಕಳ ಶೈಕ್ಷಣಿಕ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಿದೆ. ಸರ್ಕಾರ ಎಚ್ಚೆತ್ತುಕೊಂಡು ಖಾಲಿ ಇರುವ ಶಿಕ್ಷಕರ ಹುದ್ದೆಗಳ ಭರ್ತಿಗೆ ಮುಂದಾಗಬೇಕಿದೆ.

ಪ್ರೌಢಶಾಲಾ ವಿಭಾಗ

ತಾಲೂಕು             ಹುದ್ದೆ             ಭರ್ತಿ             ಖಾಲಿ

ಔರಾದ                310              215             95

ಬಸವಕಲ್ಯಾಣ      388              268             120

ಭಾಲ್ಕಿ                   291             219             72

ಬೀದರ                325              295             30

ಹುಮನಾಬಾದ್   354              246             108                         
ಒಟ್ಟು                  1668           1243             425

ಬೀದರ ಜಿಲ್ಲೆಯಲ್ಲಿ ಪ್ರಾಥಮಿಕ, ಪ್ರೌಢಶಾಲಾ ವಿಭಾಗದಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಸರ್ಕಾರದ ಆದೇಶ ಬಂದ ನಂತರ ಅತಿಥಿ ಶಿಕ್ಷಕರನ್ನು ನೇಮಿಸಲಾಗುವುದು. ಕಾಯಂ ಹುದ್ದೆಗಳ ಭರ್ತಿ ಮಾಡುವುದು ಸರ್ಕಾರದ ಮಟ್ಟದಲ್ಲಿ ನಡೆಯಲಿದೆ. 

ಡಿಡಿಪಿಐ, ಬೀದರ

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This